ಉದ್ಘಾಟನೆಯಾದ ಕೇವಲ 20 ದಿನಕ್ಕೆ ಬೆಂಗಳೂರು-ಮೈಸೂರು ಹೈವೇ ಟೋಲ್ ಏರಿಕೆ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ. ಉದ್ಘಾಟನೆಯಾದ ಮರುದಿನವೇ ಟೋಲ್ ಸುಲಿಗೆ ಶುರುವಾಗಿತ್ತು, ಈಗ 20 ದಿನದಲ್ಲಿ ಸುಲಿಗೆಯ ದರ ಏರಿದೆ. #40PercentSarkaraದ ದರೋಡೆ 100% ಆಗಿದೆ! ಇದರೊಂದಿಗೆ ಬಸ್ ಪ್ರಯಾಣದ ದರವೂ ಏರಿಕೆಯಾಗಲಿದೆ, ಜನರ ಕಷ್ಟದ ಹೊಣೆ ಹೊರುವುದು ಯಾರು? ಸಂಸದ ಪ್ರತಾತ್ ಸಿಂಹ ಅವರೋ ಅತವಾ ಪ್ರಧಾನಿ ನರೇಂದ್ರ ಮೋದಿ ಅವರೋ? ಎಂದು ಪ್ರಶ್ನಿಸಿದೆ.