ನವದೆಹಲಿ: ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಗಳ ಜೀವನದ ಮೇಲೆ ಪ್ರತಿ ಗ್ರಹದ ಸಂಚಾರದ ಪರಿಣಾಮವು ಶುಭ ಮತ್ತು ಅಶುಭ ರೂಪದಲ್ಲಿರುತ್ತದೆ. ಕೊನೆಯ ದಿನವಾದ ಮಾರ್ಚ್ 31ರಂದು ಬುಧನು ಮೀನ ರಾಶಿಯನ್ನು ತೊರೆದು ಮೇಷ ರಾಶಿ ಪ್ರವೇಶಿಸಿದ್ದಾನೆ. ಈ ಬುಧ ಸಂಕ್ರಮಣದಿಂದ ಹಲವು ರಾಶಿಗಳ ದುಃಖದ ಸಮಯ ಕೊನೆಯಾಗಿದೆ. ಈ ಸಂಚಾರವು ಕೆಲವರ ಜೀವನದಲ್ಲಿ ಭೂಕಂಪವನ್ನೇ ಸೃಷ್ಟಿಸಲಿದೆ. ಮತ್ತೆ ಕೆಲವರಿಗೆ ಇದು ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಈ ಸಮಯದಲ್ಲಿ ಅವರು ಹಣ, ಬುದ್ಧಿವಂತಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭ ಪಡೆಯುತ್ತಾರೆ. ಈ ಅವಧಿಯಲ್ಲಿ ಈ ಜನರ ಅದೃಷ್ಟದ ಬಾಗಿಲು ತೆರೆಯಲಿವೆ. ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಯು ಸಂಭವಿಸಲಿದೆ ಎಂದು ತಿಳಿದು ವ್ಯಕ್ತಿಯು ಸಂತೋಷಪಡುತ್ತಾನೆ. ಈ ಜನರು ವ್ಯಾಪಾರದಲ್ಲಿ ಅಪಾರ ಲಾಭ ಕಾಣುತ್ತಾರೆ. ಕೆಲಸ ಮಾಡುವ ಜನರು ಕೆಲಸದ ಸ್ಥಳದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಸಂಪತ್ತು ಗಳಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.